Pages

Advertisement

Protected by Copyscape Duplicate Content Penalty Protection

ನಿಮ್ಮ ನಡುವೆಯೂ ಇವರುಗಳು ಇರಬಹುದು....

ಕೆಲವರನ್ನ ಹೀಗೆ ಕರೆಯೋದೆ ಉತ್ತಮ ‘’ವಿಘ್ನ ಸಂತೋಷಿಗಳು’’. 

ತನ್ನ ಚಡ್ಡಿಯಲ್ಲಿ ಎಷ್ಟುದೊಡ್ಡ ತೂತಿದೆ ಅನ್ನುವ ಪರಿವೆ ಇಲ್ಲ ಬೇರೆಯವರ ಮನೆಯ ದೋಸೆಯಲ್ಲಿ ಎಷ್ಟು ದೊಡ್ಡ ತೂತಿದೆ ಅನ್ನೊದನ್ನ ನೋಡುವ ಕದನ ಕುತೂಹಲಿಗಳು. ನಮ್ಮ ಜನರಿಗಂತು ಈಚಿಚೆಗೆ ಸತ್ಯ ವಿಷಯಕ್ಕಿಂತ ಗಾಳಿ ಸುದ್ದಿಯ ಮೇಲೆನೆ ನಂಬಿಕೆ ಜಾಸ್ತಿ ಇಂತಹ ಜನರುಗಳೇ ಈ ವಿಘ್ನ ಸಂತೋಷಿಗಳ ಬಹುದೊಡ್ಡ Customer ಗಳು. ಇದರಿಂದ ಬೇರೆಯವರ ಮನಸಿನ ಮೇಲೆ ಯಾವ ಪರಿಣಾಮ ಬೀರ ಬಹುದು ಅನ್ನೊ ಯೋಚನೆಯೆ ಇವರಿಗೆ ಇರೋದಿಲ್ಲ ತಮ್ಮನ್ನ ತಾವು Breaking News ಕೊಡುವ ನಂ ೧ News Channel ಗಳು ಅಂತ ಅಂದುಕೊಂಡಿರ್ತಾರೆ.
ಸಾಮಾನ್ಯವಾಗಿ ನಮ್ಮಲ್ಲಿ ಹೆಚ್ಚಿನ ಜನರಿಗೆ ಇಂತಹ ಅನುಭವ ಆಗಿರುತ್ತೆ, ತಮ್ಮ ಪಾಡಿಗೆ ತಾವಿದ್ದರೂ ಕೂಡ ನೀವು ಎಲ್ಲೊ ಗೊತ್ತಿಲ್ಲದೇ ಮಾಡಿದ ಕೆಲಸವೋ ಅಥವ ನಿಮ್ಮ ಅರಿವಿಗೆ ಬಾರದ ಕೆಲವು ಘಟನೆಗಳು ಹತ್ತಾರು ಜನರ ಬಾಯಿಗೆ ಸಿಲುಕಿ ಕೊನೆಗೆ ಆ ವಿಷಯ ನಿಮ್ಮ ಕಿವಿಗೆ ಬಿದ್ದಾಗ ಅದು ಎಂದೂ ಕಂಡರಿಯದ ಘನ ಘೋರವಾದ ಸಂಗತಿ ಅನ್ನೊ ರೀತಿಯಲ್ಲಿ ಆ ಘಟನೆಯ Development, Screen play ಅಷ್ಟು ಅಚ್ಚು ಕಟ್ಟಾಗಿ ಇರುತ್ತವೆ. ಎಂತಹ ವಿಪರ್ಯಾಸ ಅಲ್ವ ಇದು….???


ಮೊನ್ನೆ ಮೊನ್ನೆ ನನ್ನ Face Book ಗೋಡೆಯ ಮೇಲೆ ಕಂಡ ಒಂದು ವಿಷಯ


ನೋಡಿ ಇದನ್ನ Follow ಮಾಡಿದ್ರೆ ನಿಮ್ಮ ಸುತ್ತ ಇರೋ ಕೆಲ ವಿಘ್ನ ಸಂತೋಷಿಗಳಿಂದ ಪಾರಾಗೋದಕ್ಕಾದ್ರು Try ಮಾಡಬಹುದು….

ಮನಸಿನ ಪುಟಗಳ ನಡುವೆ....


ಅಲ್ಲಿದ್ರು ಅಷ್ಟೆ ಇಲ್ಲಿದ್ರು ಅಷ್ಟೆ ಅಂತಹ ಹೇಳಿಕೊಳ್ಳೊ ವ್ಯತ್ಯಾಸ ಏನು ಇಲ್ಲ, ಚಂದ್ರನ ಮೇಲೆ ನಿಂತು ಭೂಮಿಯನ್ನ ನೋಡಿದ್ರೆ  ಅದು ಹೇಗೆ ದುಂಡಗೆ ಕಾಣ್ಸುತ್ತೋ, ಮಂಗಳನ ಮೇಲೆ ನಿಂತು ನೋಡಿದ್ರು ಈ ಭೂಮಿ ದುಂಡಗೇ ಕಾಣ್ಸೋದು. ಈ ಭೂಮಿ ಮೇಲಿರೋ ಜನರೂ ಕೂಡ ಅವರು ಬೆಂಗಳೂರಲ್ಲಿದ್ರೂ ಅಷ್ಟೆ, ಮಂಗಳೂರಲ್ಲಿದ್ರೂ ಅಷ್ಟೆ ಅವರ ಯೋಚನೆಗಳು ಮಾತ್ರ ಒಂದೆ, ವಾಕರಿಕೆ ತರಿಸೊ ಅವರ ಬುದ್ದಿಯೂ ಒಂದೆ. ಆದರೆ ಮುಖವಾಡಗಳು ಮಾತ್ರ ಬೇರೆ ಬೇರೆ.

ಯಾವುದೋ ಕಾರಣಕ್ಕೆ ಊರು ಬಿಟ್ಟು ಊರಿಗೆ ಬಂದೆ…. ಸರಿನಪ್ಪ ಅಲ್ಲಿಗು ಇಲ್ಲಿಗೂ ಏನ್ ವ್ಯತ್ಯಾಸ???

ಭಾಷೆ,….

ಅಲ್ಲಿ ಸಮುದ್ರ ಇರಲಿಲ್ಲ ಇಲ್ಲಿ ಸಮುದ್ರ ಇದೆ…..

ವಾತಾವರಣ ನೋಡಿದ್ರೆ ಅಲ್ಲಿ ಪರ್ವಾಗಿರ್ಲಿಲ್ಲ ಇಲ್ಲಿ ಸೆಖೆ ಜಾಸ್ತಿ

ಈ ತರಹದ ಬದಲಾವಣೆಗಳು ಯಾವ ಊರಿಂದ ಯಾವ ಊರಿಗೆ ಹೋದ್ರೂ ಇದ್ದೆ ಇರುತ್ತೆ….

ಆದ್ರೆ ಮನುಷ್ಯನ ಮನಸಿನಲ್ಲಿ ಬದಲಾವಣೆ ಕಾಣ ಬೇಕಾದ್ರೆ ಎಲ್ಲಿ ಹೋಗಬೇಕು????

ನಿಮಗೇನಾದ್ರು ಗೊತ್ತಾ????