ಮೂರು ದಿನಗಳ ಈ ಜನುಮ
ದುಃಖದಲಿ ಸುಖದಲ್ಲಿ ಜೊತೆಯಿದ್ದ ನಮಗೆ
ಇಂದು ಬರಿಯ ಬೇಸರದ ಮೌನ
ಸವೆಸಿದರು ಚಪ್ಪಲಿಯ ಹಂಚಿದರು ಅಂಬಲಿಯ
ಪಟ್ಟ ಕಷ್ಟಗಳ ಲೆಕ್ಕ ಎಂತಿದ್ದರೇನು
ಪಾಪ ಪುಣ್ಯಗಳ ಲೆಕ್ಕ ಇಟ್ಟಿಹನು ಆ ಶಿವನು
ಮರಣದಲು ಸುಖವನ್ನೆ ನೀಡಿಹನು
ಮರಳಿ ಬಾರದ ಲೋಕಕ್ಕೆ ಹರಸುವೆನು ಸುಖ ಪಯಣ
ಎಂದಿಗೂ ಶಾಶ್ವತವಲ್ಲ ಈ ದುಃಖ ದುಮ್ಮಾನ
ನೆನಪಿನಲಿ ಬದುಕಿರಲು ನೀವು ನಮ್ಮ ಸನಿಹ
-ಮನೋರಂಜನ್

No comments:
Post a Comment